ಸಾಮೂಹಿಕ ನಾಯಕತ್ವ ಹಗೂ ಪ್ರಜಾಪ್ರಭುತ್ವ ಮರುಸ್ಥಾಪನೆ ನಮ್ಮ ತಂಡದ ಉದ್ದೇಶವಾಗಿದೆ : ಕೃಷ್ಣಮೂರ್ತಿ

ಸಾಮೂಹಿಕ ನಾಯಕತ್ವ ಹಗೂ ಪ್ರಜಾಪ್ರಭುತ್ವ ಮರುಸ್ಥಾಪನೆ ನಮ್ಮ ತಂಡದ ಉದ್ದೇಶವಾಗಿದೆ : ಕೃಷ್ಣಮೂರ್ತಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಸ್ತುತ ಆಡಳಿತ ಮಂಡಳಿಯು ಪ್ರತಿ ತಾಲೂಕು ಜಿಲ್ಲೆಗಳಲ್ಲಿ ಮಿಲ್ಟ್ರಿ  ಕ್ಯಾಂಟೀನ್ ತೆರೆಯುತ್ತೇವೆ ಎಂದು ಸುಳ್ಳು ಹೇಳಿರುವುದಲ್ಲದೆ ಕೋವಿಡ್ ಸಮಯದಲ್ಲಿ ತಡೆಹಿಡಿದ ಡಿಎಗಳ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ಮರು ನೀಡದೆ ವಂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಸಾಲಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೃಷ್ಣಮೂರ್ತಿ ರವರು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಗೆ ದಿನಾಂಕ 27-12-2024 ರಂದು ರಾಜ್ಯಾಧ್ಯಕ್ಷ ಮತ್ತು ಖಜಾಂಚಿ ಸ್ನಾನಗಳಿಗೆ ನಡೆಯುವ ಚುನಾವಣೆ ಅಂಗವಾಗಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ವತಿಯಿಂದ ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಕೃಷ್ಣಮೂರ್ತಿ ರವರು ಮಾತನಾಡಿ ರಾಜ್ಯದ ವಿವಿಧ ವೃಂದ ಸಂಘಗಳು ಮತ್ತು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಹಾಗೂ ಹಿರಿಯ ಮುಖಂಡರುಗಳು ಜಿಲ್ಲಾ ಹಾಗೂ ತಾಲೂಕು ಮುಖಂಡರುಗಳ ಒತ್ತಾಸೆಯ ಮೇರೆಗೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ವತಿಯಿಂದ ಅಧ್ಯಕ್ಷ ಅಭ್ಯರ್ಥಿಯಾಗಿ ಕೃಷ್ಣಮೂರ್ತಿಯಾದ ನಾನು ಹಾಗೂ ಖಜಾಂಚಿಯಾಗಿ ವಿ. ವಿ. ಶಿವರುದ್ರಯ್ಯ ಇವರನ್ನು ಸ್ಪರ್ಧಿಸುತಿದ್ದೇವೆ.

ಸಮಾನತೆ, ಸಶಕ್ತ, ಸದೃಢ ಸಂಘಟನೆ ಹಾಗೂ ರಾಜಿರಹಿತ ಹೋರಾಟ ಸ್ವಾವಲಂಬನೆಯ ವೈಜ್ಞಾನಿಕ ನಿಲುವುಗಳಿಗೆ ಬದ್ಧರಾಗಿ ನೌಕರರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ತಂಡ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಪ್ರಸ್ತುತ ಇರುವ ಸಂಘಟನೆಯ ನಾಯಕರು ಅವಕಾಶವಾದಿ ಮನೋಭಾವನೆ ತಳೆದಿದ್ದು ಕಳೆದ ಐದು ವರ್ಷ ತಮ್ಮ ಅನುಕೂಲಕ್ಕೆ ತಕ್ಕ ನಿಲುವುಗಳಿಗೆ ಸಂಘಟನೆಯನ್ನ ದುರುಪಯೋಗ ಮಾಡಿಕೊಂಡು ಸರ್ಕಾರಿ ನೌಕರರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಿ ನೌಕರರ ಸಂಘವನ್ನು ಬಳಸಿಕೊಳ್ಳಲಾಗಿದೆ.

2019-24 ನೇ ಅವಧಿಯಲ್ಲಿ ಸರ್ಕಾರಿ ನೌಕರ ಸಂಘದ ವತಿಯಿಂದ ಯಾವುದೇ ಸಮಸ್ಯೆಗಳ ವಿರುದ್ಧ ಹೋರಾಟಗಳು ರಚನಾತ್ಮಕವಾಗಿ ನಡೆಯದಿರುವುದರಿಂದ ನೂತನ ಪಿಂಚಣಿ ಯೋಜನೆ (NPS) ಇಲ್ಲಿಯವರೆಗೆ ರಾಗದೇ ಇರುವುದು, ಹಳೆ ಪಿಂಚಣಿ ಯೋಜನೆ, (OPS) ಮರು ಜಾರಿಗೊಳಿಸುವುದು ಗಗನ ಕುಸುಮವಾಗಿಯೇ ಉಳಿದಿದೆ.

ಈಗಿರುವ ಸರಕಾರಿ ನೌಕರ ಸಂಘದ ಆಡಳಿತ ಮಂಡಳಿಯು ಕೇಂದ್ರಕ್ಕೆ ಸರಿಸಮಾನವಾದ ವೇತನ ಕೊಡಿಸುತ್ತೇವೆ ಎಂದು ಹುಸಿ ಭರವಸೆಗಳನ್ನು ಬಿತ್ತಿ 1-7-2022 ರಿಂದ ಜಾರಿಯಾಗಬೇಕಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು 1-8-2024 ರಿಂದ ಜಾರಿಗೊಳಿಸುವ ಮೂಲಕ ಎರಡು ವರ್ಷಗಳ ಕಾಲ ವಿಳಂಬ ಮಾಡಿ ವೇತನ ಆಯೋಗ ಜಾರಿಯಾಗಿದೆ.

ಈಗಿರುವ ಸರಕಾರಿ ನೌಕರ ಸಂಘದ ಆಡಳಿತ ಮಂಡಳಿಯು ಕೇಂದ್ರಕ್ಕೆ ಸರಿಸಮಾನವಾದ ವೇತನ ಕೊಡಿಸುತ್ತೇವೆ ಎಂದು ಹುಸಿ ಭರವಸೆಗಳನ್ನು ಬಿತ್ತಿ 1-7-2022 ರಿಂದ ಜಾರಿಯಾಗಬೇಕಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು 1-8-2024 ರಿಂದ ಜಾರಿಗೊಳಿಸುವ ಮೂಲಕ ಎರಡು ವರ್ಷಗಳ ಕಾಲ ವಿಳಂಬ ಮಾಡಿ ವೇತನ ಆಯೋಗ ಜಾರಿಯಾಗಿದೆ.

ಪ್ರಸ್ತುತ ಆಡಳಿತ ಮಂಡಳಿಯು ಪ್ರತಿ ತಾಲೂಕು ಜಿಲ್ಲೆಗಳಲ್ಲಿ ಮಿಲ್ಕಿ ಕ್ಯಾಂಟೀನ್ ತೆರೆಯುತ್ತೇವೆ ಎಂದು ಸುಳ್ಳು ಹೇಳಿರುವುದಲ್ಲದೆ ಕೋವಿಡ್ ಸಮಯದಲ್ಲಿ ತಡೆಹಿಡಿದ ಡಿಎಗಳ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ಮರು ನೀಡದೆ ವಂಚಿಸಲಾಗಿದೆ.

ತಾಲೂಕು ಚುನಾಯಿತ ಪ್ರತಿನಿಧಿಗಳಿಗೆ ರಾಜ್ಯ ಸಂಘಕ್ಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೇ ಇರುವುದು ಕೂಡ ಸರ್ಕಾರಿ ನೌಕರರಿ ಇಷ್ಟು ವರ್ಷಗಳ ಕಾಲ ಇದ್ದ ಪ್ರತಿನಿಧಿಗಳ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ.

ಪ್ರಸ್ತುತ ನಮ್ಮ ತಂಡವು ಸರ್ಕಾರಿ ನೌಕರರು ಅನುಭವಿಸುತ್ತಿರುವ ವರ್ಗಾವಣೆ ಸಮಸ್ಯೆ, ಬಡ್ತಿ, ಖಾಲಿ ಹುದ್ದೆಗಳ ಭರ್ತಿ, ಎನ್‌ಪಿಎಸ್ ರದ್ದತಿಯಂತಹ ಅನೇಕ ನೌಕರರ ಸಮಸ್ಯೆಗಳಿಗೆ ಧ್ವನಿ ಆಗಲಿದ್ದೇವೆ.

ಸರ್ಕಾರಿ ನೌಕರರ ಸಂಘದಲ್ಲಿ ಸಾಮೂಹಿಕ ನಾಯಕತ್ವ ಹಗೂ ಪ್ರಜಾಪ್ರಭುತ್ವ ಮರುಸ್ಥಾಪನೆ ನಮ್ಮ ತಂಡದ ಉದ್ದೇಶವಾಗಿದೆ'

ಹಿತವೇ ಮಾಮಾಣಿಕತೆ, ಯಾರ ಜೊತನೂ ಕೂಡಾ ಅನುಸಂಧಾನ ಮಾಡಿಕೊಳ್ಳದೇ ನಾಡಿನ ನೌಕರರ ಹಿತವೇ ನಮ್ಮ ತಂಡದ ಉದ್ದೇಶವಾಗಿರುವುದರಿಂದ ಸರ್ವರೂ ನಮ್ಮ ತಂಡದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಕಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದರು.