ಮನೀಶ್ ಸಿಸೋಡಿಯಾ ಸೋಡಿಯ ಜಾಮೀನು-- ಸತ್ಯಕ್ಕೆ ಸಂದ ಜಯ ಮುಖ್ಯಮಂತ್ರಿ ಚಂದ್ರು

Bail of Manish Sisodia Sodi Victory for Truth :mukhymantri Chandru

ಮನೀಶ್ ಸಿಸೋಡಿಯಾ ಸೋಡಿಯ ಜಾಮೀನು-- ಸತ್ಯಕ್ಕೆ ಸಂದ ಜಯ ಮುಖ್ಯಮಂತ್ರಿ ಚಂದ್ರು
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ದೆಹಲಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರವರಿಗೆ ಸಿಕ್ಕಿರುವ ಜಾಮೀನು ಸತ್ಯಕ್ಕೆ ಸ್ವಲ್ಪ ನಿಧಾನವಾದರೂ ಸಹ ಎಂದಿಗೂ ಜಯವಿದೆ ಎಂಬುದು ಈ ಮೂಲಕ ಸಾಬೀತಾಗುತ್ತಿದೆ" ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಹೇಳಿದರು.

"ವಿಶ್ವವೇ ತಲೆಯೆತ್ತಿ ನೋಡುವಂತಹ ದೆಹಲಿಯಲ್ಲಿನ ಶಿಕ್ಷಣ ಕ್ರಾಂತಿಯನ್ನು ಸಹಿಸದ ಶಕ್ತಿಗಳು ಖೋಟ್ಟಿ ಅಬಕಾರಿ ಹಗರಣದಲ್ಲಿ ಮನೀಶ್ ರವರನ್ನು ಸಿಲುಕಿಸಿ ಖುಷಿ ಪಟ್ಟವರಿಗೆ ಇಂದಿನ ನ್ಯಾಯಾಲಯದ ಆದೇಶ ಮುಖಭಂಗವನ್ನುಂಟು ಮಾಡಿದೆ. 

ಇದೇ ರೀತಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸತ್ಯೇಂದ್ರ ಜೈನ್ ರವರಿಗೂ ಶೀಘ್ರದಲ್ಲಿ ಜಾಮೀನು ಸಿಗಲಿದ್ದು , ದೆಹಲಿ ಮಾದರಿಯ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ದೇಶದೆಲ್ಲೆಡೆ ನಾಗಾಲೋಟದಲ್ಲಿ ಪಸರಿಸಲಿದೆ ಎಂದು ಚಂದ್ರು ಅಭಿಪ್ರಾಯ ಪಟ್ಟರು.