ಪರಿಶಿಷ್ಟ ಜಾತಿ ಸಮುದಾಯದ ಸುಮಾರು 35 ಸಾವಿರ ಕೋಟಿ ದುರುಪಯೋಗ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ

Protest alleging that about 35 thousand crores been misused of scheduled caste community

ಪರಿಶಿಷ್ಟ ಜಾತಿ ಸಮುದಾಯದ ಸುಮಾರು 35 ಸಾವಿರ ಕೋಟಿ ದುರುಪಯೋಗ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬಂಗಾರಪೇಟೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರಾದ ಕೋಟಿಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ದಲಿತ ಸಮುದಾಯಗಳಿಗೆ ಅನ್ಯಾಯ ಉಂಟಾಗಿದೆ ಎಂದು ಆರೋಪಿಸಿ ಶಾಸಕರ ಮನೆಯ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು. 

ಈ ಸಂದರ್ಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ರವರು ಮಾತನಾಡಿ ಪರಿಶಿಷ್ಟ ಜಾತಿ ಸಮುದಾಯದ ಎಸ್ ಸಿ ಪಿ ಮತ್ತು ಟಿಎಸ್‌ಪಿ ಸರಿ ಸುಮಾರು 35 ಸಾವಿರ ಕೋಟಿ ದುರುಪಯೋಗ ಆಗಿರುವುದನ್ನು ಖಂಡಿಸಿ ಇಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ದಲಿತ ಮತಗಳನ್ನು ಪಡೆದು ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕರು ಅನ್ಯಾಯ ನಡೆಯುತ್ತಿದ್ದರೂ ಮೌನವಹಿಸುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಕಿಡಿ ಕಾಡಿದರು. 

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಸುಲಿಕುಂಟೆ ರಮೇಶ್ ,ಮುಖಂಡರಾದ ಕಲಾವಿದ ಎಲ್ಲಪ್ಪ, ಹುಣಸನಹಳ್ಳಿ ವೆಂಕಟೇಶ್, ದೇಶಲ್ಲಿ ಶ್ರೀನಿವಾಸ್, ಪಿವಿಸಿ ಮಣಿ ,ಗಂಗಮ್ಮನ ಪಾಳ್ಯ ರಘು ,ರವಿ ಇತರರು ಉಪಸ್ಥಿತರಿದ್ದರು.