ನಿಮಗೆ ನೈತಿಕತೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ: ಪ್ರತಾಪ್ ಸಿಂಹ

If you have morals, resign as CM immediately: Pratap Simha

ನಿಮಗೆ ನೈತಿಕತೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ: ಪ್ರತಾಪ್ ಸಿಂಹ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಮೈಸೂರು: ಮುಡಾ ಸದಸ್ಯರ ಸಭೆಯಲ್ಲಿ ಸಾವಿರಾರು ಪುಟಗಟ್ಟಲೇ ಮೀಟಿಂಗ್ ಅಜೆಂಡಾ ಇರುತ್ತದೆ. ಸೈಟ್ ಹಂಚಿಕೆ ವಿಷಯದಲ್ಲಿ ಮುಡಾ ಸದಸ್ಯರ ಕಣ್ಣಪ್ಪಿನಿಂದ ಸಿಎಂ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆಗೆ ಒಪ್ಪಿಗೆ ಆಗಿತ್ತು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಕಣ್ಣಪ್ಪಿನಿಂದ ಸೈಟ್ ಹಂಚಿಕೆಯಾದ ಮಾತ್ರಕ್ಕೆ ಕಾನೂನು ಪದವಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಅವರು ಅಂದು ಅಕ್ರಮವಾಗಿ ತಮ್ಮ ಪತ್ನಿ ಅವರಿಗೆ ಸೈಟ್ ಹಂಚಿ ಕೆಯಾಗುವಾಗ ಯಾಕೆ ಸುಮ್ಮನ್ನಿದ್ದರು ಎಂದು ಪ್ರಶ್ನಿಸಿದ್ದಾರೆ. ಮುಡಾ ವ್ಯವಸ್ಥೆಯಲ್ಲಿರುವ ಲೋಪದೋಷ ಬಗ್ಗೆ ಕನಿಷ್ಠ ಪರಿಜ್ಞಾನ ಸಿದ್ದರಾಮಯ್ಯ ಅವರಿಗೆ ಇರಲಿಲ್ವಾ ಎಲ್ಲಾ ಫೈಲ್ ಎಲ್ಲಾ ಪುಟಗಳನ್ನು ಮುಡಾ ಸದಸ್ಯರು ತೆರೆದು ನೋಡಲ್ಲ ಎಂಬ ದೌರ್ಬಲ್ಯವನ್ನು ನೀವು ದುರುಪಯೋಗ ಮಾಡಿಕೊಂಡಿದ್ದೀರಿ. 14 ಬಜೆಟ್ ಮಂಡಿಸಿರುವವರು ನೀವು.. ಕಾನೂನು ಪಂಡಿತರು ನೀವು.. ಹೀಗಿರುವಾಗ ಸರ್ಕಾರಕ್ಕೆ ಬರುವ ಆದಾಯವನ್ನು ನೇರವಾಗಿ ಹೊಡೆದಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ. ನಿಮಗೆ ನೈತಿಕತೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.